ಕಂಪನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ‘ಶಿವ’ ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ. ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಓಂಪ್ರಕಾಶ್ರಾವ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯಹೆಗಡೆ ಛಾಯಾಗ್ರಾಹಕರಾಗಿದ್ದಾರೆ. ಗುರುಕಿರಣ್ ‘ಶಿವ’ನಿಗೆ ಸಂಗೀತ ನೀಡಿದ್ದು, ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಪಳನಿರಾಜ್, ಡಿಫ಼ರೆಂಟ್ಡ್ಯಾನಿ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸೋಮರಾಜ್ ಅವರ ಸಹ ನಿರ್ದೇಶನವಿದೆ.
ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಾಗಿಣಿ. ರಂಗಾಯಣರಘು, ಶೋಭ್ರಾಜ್, ಬುಲೆಟ್ ಪ್ರಕಾಶ್, ಗುರುದತ್, ಸಾಯಿರವಿ, ಸರಿಗಮವಿಜಿ, ಚಿತ್ರಾಶೆಣೈ, ಹರೀಶ್ರಾಯಪ್ಪ, ಮನದೀಪ್ರಾಯ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.